ಪಾರ್ಕ್ವೊಂದರಲ್ಲಿ ಪ್ರೇಮಿಗಳು ಕುಳಿತಿರುವಾಗ ಅಲ್ಲಿಗೆ ಬಂದ ಕಿಡಿಗೇಡಿಗಳು ಅವರನ್ನು ಚುಡಾಯಿಸುತ್ತಾರೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ನಾಯಕ ರೋಹಿತ್ ಅವರೊಂದಿಗೆ ಪೈಟ್ ಮಾಡಿ ನಿಮ್ಮಂಥವರಿಂದಲೇ ಅತ್ಯಾಚಾರಗಳು ಜಾಸ್ತಿಯಾಗುತ್ತಿವೆ. ಇನ್ನು ಮುಂದಾದರೂ ಹೆಣ್ಣು ಮಕ್ಕಳನ್ನು ಗೌರವಿಸಿ ಎಂದು ಬುದ್ಧಿ ಹೇಳಿ ಕಳುಹಿಸುತ್ತಾನೆ. ಈ ಮೇಲ್ಕಂಡ ದೃಶ್ಯವನ್ನು ಮುಳಬಾಗಿಲಿನ ಪಾರ್ಕ್ವೊಂದರಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಇದರೊಂದಿಗೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯಗೊಂಡಿತು.
ರಾಯಲ್ ಸಿನಿ ಕ್ರಿಯೇಷನ್ಸ್ ಸಂಸ್ಥೆಯಲ್ಲಿ ಸರ್ದಾರ್, ಪಿ, ಬೀರಪ್ಪ ನಿರ್ಮಿಸುತ್ತಿರುವ ಈ ಚಿತ್ರವನ್ನು ಎಲ್.ಎಂ.ಗೌಡ, ಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ರಾಜು ಶಿರಾ ಛಾಯಾಗ್ರಹಣ ಶ್ರೀ ಹರ್ಷ ಸಂಗೀತ, ಮಂಜುನಾಥ ಎಂ.ಎನ್.ಹಳ್ಳಿ, ಚಿತ್ರಕಥೆ ಮತ್ತು ಸಂಭಾಷಣೆ, ಶ್ರೀ ತೇಜ ಸಾಹಿತ್ಯ, ಶಂಕರ್, ಸಂದೀಪ್ ನೃತ್ಯ ನಿರ್ದೇಶನ ಥ್ರಿಲ್ಲರ್ ಮಂಜು ಸಾಹಸ, ಕುಮಾರ್.ಸಿ.ಹೆಚ್. ಸಂಕಲನವಿದೆ. ರೋಹಿತ್, ಆಲ್ಮಾಸ್, ಆಶಿಕ್ ವೆಂಕಟರಮಣಪ್ಪ, ಶೋಭರಾಜ್, ಶಂಕರ್ಭಟ್, ವೆಂಕಟೇಶಪ್ಪ ಆಶಿನಿ, ಸಂತೋಷ್, ನಾಗೇಂದ್ರ, ತೆಲುಗು ಪ್ರಭಾಕರ್, ಆಲಿಷಾ, ಬೀರಪ್ಪ ಮುಂತಾದವರು ತಾರಾಬಳಗವಿದೆ.